Wednesday, April 20, 2011

ಆದರ್ಶದ ಕನಸುಗಳು - ವಾಸ್ತವದ ರಾಮರಾಜ್ಯ

ರಾಮರಾಜ್ಯ ಎಂದರೇನು?

ರಾಮನ ಕಾಲವೇ, ನಂತರವೇ? ರಾಮರಾಜ್ಯ ಏಕೆ ಆದರ್ಶ?
ಪ್ರಜೆಗಳಿಗೆ ಸುಖ, ಸಂತಸ, ನೆಮ್ಮದಿ, ಸಂತೃಪ್ತಿ ಸಮೃದ್ಧವಾಗಿರುವ ಕಾಲವೇ ರಾಮರಾಜ್ಯ. ಯಾವುದೇ ಭಯವಿಲ್ಲದೆ ಪರಸ್ಪರ ಸಮಾಧಾನ ನಂಬಿಕೆಗಳ ಆಧಾರದಲ್ಲಿ ಬೆಳೆದು ಬಂದ ರಾಜ್ಯವೇ ರಾಮರಾಜ್ಯ

ರಾಮರಾಜ್ಯ ಎಂಬುದು ಭರತ ಆಳಿದ ಕಾಲದಲ್ಲಿ ಇದ್ದ ಆಡಳಿತ.
ರಾಜ ಆಳರಸನಾಗದೆ, ಜನರ ನಡುವೆ ಒಂದಾಗಿ, ತಾನೂ ನಾಗರಿಕನಂತೆ ಸಾಮಾನ್ಯನಾಗಿ, ರಾಜ್ಯ ಕೋಶ ಮತ್ತು ಸಂಪತ್ತುಗಳನ್ನು ಜನರ ಏಳಿಗೆಗಾಗಿ ವಿನಿಯೋಗಿಸಿದ ಕಾಲ.
ರಾಜ ಯಾವುದೇ ಯುದ್ದಗಳಲ್ಲಿ ತೊಡಗದೆ, ವಿಷಯ ಲೋಲುಪನಾಗದೆ, ಸಾಮಾನ್ಯನಂತೆ, ಜನರ ನಡುವೆ ಸಾಮಾನ್ಯನಾಗಿ, ಕೇವಲ ಜನ ಪತ್ರತಿನಿಧಿಯಂತೆ ಬದುಕಿದ ನಿಜ ಪ್ರಜಾಪ್ರಭುತ್ವ ಕಾಲ... ಗೋ ಸಂಪತ್ತು, ಭೂ ಸಂಪತ್ತುಗಳಿ ಮಿತಿ ಮೀರದ ಕಂದಾಯ ಹಾಕದ, ಜನರ ಸಂತೃಪ್ತಿಯೇ ನಿಜವಾದ ಾಡಳಿತ ೆಂದು ಭಾವಿಸಿದ ರಾಜ ಹೀಗೆ ರಾಮರಾಜ್ಯ ನಡೆದ ಕಾಲ ....


ನೀವೇನಂತೀರಿ

Sunday, April 17, 2011

ವನಸುಮ

ಕಾಡ ಮಲ್ಲಿಗೆಗೆ ಮುಡಿವವರು ಬೇಕಿಲ್ಲ,
ಪಸರಿಸಿದ ಪರಿಮಳದೆ ಸಾರ್ಥ್ಯಕ್ಯವೆಲ್ಲ
ಅರಳಿಸಿದ ಪರಮಾತ್ಮ ಬೆಳಗಿಸದೆ ಬಿಡಲಾರ
ಮುಡಿಗಿಂತ ಮಿಗಿಲಾದ ಸ್ಥಳ ನೀಡಬಲ್ಲ

ನಲುಗದಿರು ಕೋಮಲೆ ಇಲ್ಲದನು ನೆನೆಸಿ
ಬಾಡಿ ಹೋಗುವ ಭಾವ ಮುದುಡಿ ಹೋಗಲಿ ಇಂದೇ
ಅರಳಲಿ ಬಾಡಿದ ಭಾವ ಮುಕ್ತಿ ಪಥದೆಡೆಗೆ
ಮುಡಿಗಿಂತ ಮಿಗಿಲಾದ ನೆಲೆ ದೊರಕಿತಲ್ಲ

ಇರುವೆ ಸಾಲು

ಬದುಕಿದುವೆ ಇರುವೆ ಸಾಲು
ಸಾಲಿನಲ್ಲೇ ನಡೆಯಬೇಕು,
ದುಡಿಯುತಲೇ ಸಾಯಬೇಕು.
ಇರುವ ತನಕ ದುಡಿತ - ಬಡಿತ

ಆದರೇನು ಮಾಡಲಿ
ನನ್ಪ್ತ ಮನದ ಹಾದಿ ತುಂಬಾ
ಕನಸಿನದೇ ಗೋಪುರ
ಲಾಲಿ ಹಾಡು ಕೇಳಬೇಕು
ಮನಸು ಹರಡಿ ಹರಿಯ ಬೇಕು

ಆದರೇನು ಮಾಡಲಿ
ಕನಸಿಗಿಲ್ಲಿ ತಾವು ಇಲ್ಲ
ನಡೆವ ಹಾದಿ ತುಂಬಾ ನೋಡು
ಕಲ್ಲು ಮುಳ್ಳು ಹಾದಿ ಜಾಡು
ಮೃಗತೃಷ್ಣೆಯ ಮರೆಯಬೇಕು
ಬದುಕು ಇಂತೆಯೇ ಸಾಗಬೇಕು

ಹತ್ತು ಹೆಜ್ಜೆ ಜೊತೆಯಲ್ಲಿಟ್ಟು
ನಡೆವ ನಾವು ಸ್ನೇಹದಿ
ಸಪ್ತಪದಿಗೂ ಮಿಗಿಲದುವೆ
ಸ್ನೇಹ ಸಂಚಾರವು

ಆದರೇನು ಮಾಡಲಿ
ನಾನು ಮೇಘರಾಜನಲ್ಲ
ಆಗಸವು ನನ್ನದಲ್ಲ
ನಾನು ನಡೆವ ಭೂಮಿ ಕೂಡಾ
ನನ್ನದೆಂಬ ಭ್ರಮೆಯೂ ಇಲ್ಲ.

ಬಾರೇ ನಗುವೆ,
ಮಡಿಲ ಮಗುವೆ
ಬದುಕು ಮುಂದೆ ಸಾಗಲಿ
ಮುಖದ ನಗೆಯು ಮಾಗಲಿ

Saturday, April 16, 2011

Ashtaa vakra geetha ಅಷ್ಟಾವಕ್ರ ಗೀತಾ

ಒಮ್ಮೆ ಜನಕ ಮಹಾರಾಜ ತನ್ನ ಅಸ್ಥಾನದಲ್ಲಿ ದರ್ಬಾರ್ ನಡೆಸುತ್ತಿದ್ದಾಗ, ನಡು ಮಧ್ಯಾಹ್ನದ ಹೊತ್ತು ಒಮ್ಮೆಲೆ ನಿದ್ರೆಯ ಜೊಂಪು ಹತ್ತಿತಂತೆ. ದರಬಾರ್ ನಡೆಯುವಾಗ ಹತ್ತಿದ ನಿದ್ರೆಯ ಜೊಂಪಿನ ನಡುವೆ ಸಣ್ಣ ಕನಸಿನ ಕಲರವ. ಆ ಕನಸಿನಲ್ಲಿ ಜನಕ ಮಹಾರಾಜ ಆ ಕನಸಿನಲ್ಲಿ ರೊಟ್ಟಿ ತಿನ್ನುವ ಸಲುವಾಗಿ ಯಾರ ಬಳಿಯೋ ಬೇಡಿದಂತೆ, ಇನ್ನೇನೇನೋ ಕನಸುಗಳ ಸರಣೆ ಯಾತ್ರೆ. ಕನಸಿನಲಿ ತಡೆಯಲಾರದ ಹಸಿವಿನ ಹೊಡೆತ, ಬೇಡಿದ ರೊಟ್ಟಿ ದೊರೆಯದ ನೋವಿನ ಭಾವದ ನಡುವೆ ಎಚ್ಚರವಾಯಿತಂತೆ.

ಎಚ್ಚರವಾದಾಗ ನೋಡಿದರೆ ರೊಟ್ಟಿಯೂ ಇಲ್ಲ, ರೊಟ್ಟಿ ಹಿಡಿದಿದ್ದ ವ್ಯಕ್ತಿಯೂ ಇಲ್ಲ, ದರಬಾರ್ ನಡೆಯುತ್ತಿದೆ. ತಾನು ಸಿಂಹಾಸನದ ಮೇಲೆ ಕುಳಿತು ನಿದ್ರೆಯ ಜೊಂಪಿನಲಿ ಕಂಡ ಕನಸಿದು. ಆದರೆ ಹೊಟ್ಟೆಯಲಿ ಉಳಿದಿರುವ ಹಸಿವು ಕಂಡ ಕನಸನ್ನು ಕೇವಲ ಕನಸು ಇನ್ನಲು ಒಪ್ಪುತ್ತಿಲ್ಲ. ಈ ಗೊಂದಲವನ್ನು ಜನಕ ಮಹಾರಾಜ ತನ್ನ ಆಸ್ಥಾನದಲ್ಲಿ ಬಂದಿದ್ದ ಅಷ್ಟಾವಕ್ರ ಮುನಿಯ ಬಳಿ ಕೇಳಿದನಂತೆ. ಆ ಸಂವಾದದ ಸಂಪೂರ್ಣ ಪಾಠವೇ ಅಷ್ಟಾವಕ್ರ ಗೀತಾ.

ಅಷ್ಟಾವಕ್ರ ಮುನಿ ಬದುಕಿನ ಸಂಪೂರ್ಣ ಜ್ಞಾನ ಪಡೆದಿದ್ದ ಮಹಾ ತಪಸ್ವಿ. ತನ್ನ ದೇಹದಲ್ಲಿ ಎಂಟು ವಕ್ರಗಳನ್ನು ಹೊಂದಿದ್ದ ವ್ಯಕ್ತಿ. ಒಂದು ಕೈ ಉದ್ದ, ಮತ್ತೊಂದು ಗಿಡ್ಡ, ಹೀಗೇ ಎಂಟು ವಕ್ರಗಳು. ಜ್ಞಾನದಲ್ಲಿ ಅಪ್ರತಿಮ.

ಸತ್ಯ ಮತ್ತು ಮಿಥ್ಯಗಳ ಅನ್ವೇಷಣೆಯೇ ಈ ಅಷ್ಟಾವಕ್ರ ಗೀತಾ.... ಒಮ್ಮೆ ಕೇಳಿ ಆನಂದಿಸಿ.

Thursday, April 15, 2010

world heritage day

On Occasion of the world heritage day , I wish to introduce a piece of history & heritage of Bangalore.

Gavipura is one of the Bangalore's urban village, one among a few sites that the modern city has evolved from.
The cave temple dedicated to Lord Gangadhareshwara, The plase also known as gowtham kshetra & bharadwaja kshetra, wherein the sage Gowtham and bharadwaja used to worship Lord gangadhara here.

The Kempabudhi lake built by Kempegowda - I arounds 1540's, which is named after his daughter in law...

The watch tower built by Kempegowda -II. who was a visionary, who had a fore thought to restrict the exorbitant growth of the city without proper development of basic amenities.... to ensure he has built four border watch towers to Bangalore.... The western watch tower of Bangalore is located by side of Kempambudhi lake.

The Gavipura has one of the ancient temple of Big bull at basavanagudi, and dodda ganapathi temple, sunkenahalli village, hari hara gudda temple, dhobhji ghat, wrestling schools, swimming pools maratha colony, social institutions Ramakrishna Ashram, Udayabhanu kalasangha, Rashtrotthana parishath, Kalamandir, SVYAAS, and so on makes a one of our unique urban centres.

To know more about this unique mixture of past and present of bangalore..... pls do visit Udayabhanu kalasangha for a dialogue based project on world heritage day on April 18 2010 at 10 AM behind Ramakrishna Ashram, Bassavanagudi.

Friday, April 2, 2010

ಬೆಂಗಳೂರೆಂಬೋ ಮಾಯಾನಗರಿ - I

ಬೆಂಗಳೂರು ಅಂದರೆ ಇಂದು ನಿನ್ನೆಯದಲ್ಲ. ನೀವು ಲಾಲಬಾಗ್ ತೋಟದಲ್ಲಿ ಕೆಂಪೇಗೌಡ ಗಡಿ ಗೋಪುರದ ಬಳಿ ನಿಂತಾಗ ಸುಮಾರು ೨೯೦-೩೦೦ ಕೋಟಿ ವರುಷಗಳ ಬಂಡೆಯ ಮೇಲೆ ನಿಂತಿದ್ದೀರಿ.
ಕ್ರಿಸ್ತ ಪೂರ್ವ ೬೦೦೦ ದಷ್ಟು ಹಿಂದೆಯೇ ಇಲ್ಲಿ ಹೊಸ ಶಿಲಾಯುಗದ ಜನರು ವಾಸ ಮಾಡುತ್ತಿದ್ದರು. ೧೬-17ನೆಯ ಶತಮಾದಲ್ಲಿ ನಿರ್ಮಾಣವಾದ ಹಲಸೂರಿನ ಸೋಮೇಶ್ವರ ದೇವಾಲಯ ನಗರದ ಹಿರಿಮೆಗಳಲ್ಲೊಂದು.

ಬೆಂಗಳೂರು ಹಾಗೂ ಇಂದಿನ ಕರ್ನಾಟಕದ ಬಹುಭಾಗ ದಕ್ಷಿಣ ಭಾರತದ ಪ್ರಸ್ಥಭೂಮಿ. ಸಮುದ್ರ ಮಟ್ಟದಿಂದ ಸರಾಸರಿ ೯೦೦ ಮೀಟರು ಎತ್ತರದಲ್ಲಿರುವುದರಿಂದ ಇಲ್ಲಿನ ಪರಿಸರ ಸದಾ ಆಹ್ಲಾದಕರ. ಬೆಂಗಳೂರು (ಮೆಟ್ರೋಪೋಲ್ ) ಮಹಾನಗರ ಸುಮಾರು ೧೪೦೦ ಚ.ಕಿ.ಮೀ ಪ್ರದೇಶಗಳನ್ನು ಒಳಗೊಂಡ ಪ್ರದೇಶ.
1949ರಲ್ಲಿ ಬೆಂಗಳೂರಿಗೆ ನಗರಸಭೆ ಆಡಳಿತ ಆರಂಭ. ಆಗ ನರದ ವಿಸ್ತೀರ್ಣ ೬೯ ಚ.ಕಿಲೋ ಮೀಟರು. 1970ರ ದಶಕದಲ್ಲಿ ೪೦೦ ಚದರ ಕಲೋಮೀಟರಿಗೆ ಹಿಗ್ಗಿತು. ಈಗ ಬೆಳೆಯುತ್ತಿರುವ ವೇಗ ಮತ್ತು ಅದರ ಓಘ ದೇವರಿಗೇ ಪ್ರೀತಿ.
ಬಸವನಗುಡಿಯ ಬಸವನ ಪಾದದ ಕೆಳಗೆ ಉದ್ಭವವಾಗುವ ವೃಷಭಾವತಿ ಬಿಟ್ಟರೆ ಹೆಸರಿಗೆ ಕೂಡಾ ಬೆಂಗಳೂರಿಗೆ ಬೇರೆ ನದಿ ಇಲ್ಲ. ಬಸವನ ಪಾದದ ಅಡಿಯಿಂದ ಶುದ್ಧ ನೀರಿನ ತೊರೆಯಾಗಿ ಹರಿಯುವ ವೃಷಭಾವತಿ ನದಿಯ ಬಗ್ಗೆ ಶಾಸನಗಳಲ್ಲಿ ಕೂಡಾ ಉಲ್ಲೇಖವಿದೆ.

Thursday, April 1, 2010

April Fool

ಏಪ್ರಿಲ್ ಫೂಲ್
ಯಾಕೆ ಜೂನ್ ಅಥವಾ ನವೆಂಬರ್ ಫೂಲ್ ಅಲ್ಲ.
ಹಿಂದೆ ವರುಷದ ಆರಂಭ ಏಪ್ರಿಲ್ ಒಂದರಿಂದ ಆರಂಭ ಆಗುತ್ತಾ ಇತ್ತು.
ಆ ನಂತರ ಈ ದಿನಾಂಕವನ್ನು ಕ್ರಿಸ್ತ ಜನನದ ನಂತರದ ತಿಂಗಳಿಂದ ಆರಂಭಿಸಲು ತೀರ್ಮಾನಿಸಲಾಯಿತು. ಆದರೆ ಹೆಚ್ಚಿನ ಜನ ಬದಲಾವಣೆಗೆ ಸ್ಪಂದಿಸಲಿಲ್ಲ. ಅವರನ್ನು ಒಪ್ಪಸುವ ಸಲುವಾಗಿ ಈ ರೀತಿಯ ಪ್ರಚಾರ ಆರಂಭ ಆಯಿತಂತೆ.

ಮಾರ್ಖರಾಗಬಯಸದ ಜನ ಜನವರಿಯನ್ನೇ ತಮ್ಮ ವರುಷದ ಆರಂಭ ಎಂದು ಬದಲಾಯಿಸಿಕೊಳ್ಳಲಾರಂಭ ಮಾಡಿದರು. ಹೀಗೆ ಪೂರ್ಣ ಬದಲಾಗದ ಜನರನ್ನು ಮೂರ್ಖರು ಎಂದು ಆರಂಭ ಮಾಡಿದ ಗೇಲಿ ಇಂದು ಎಲ್ಲಿಗೆ ಬಂದು ನಿಂತಿದೆ.

ಹೇಳಿ ಇಂದು ನಿಮ್ಮನ್ನು ಮೂರ್ಖರನ್ನಾಗಿಸಿದವರಿಗೆ ಈ ಕಾರಣ ಗೊತ್ತಾ ಅಂತಾ ?????