Sunday, April 17, 2011

ವನಸುಮ

ಕಾಡ ಮಲ್ಲಿಗೆಗೆ ಮುಡಿವವರು ಬೇಕಿಲ್ಲ,
ಪಸರಿಸಿದ ಪರಿಮಳದೆ ಸಾರ್ಥ್ಯಕ್ಯವೆಲ್ಲ
ಅರಳಿಸಿದ ಪರಮಾತ್ಮ ಬೆಳಗಿಸದೆ ಬಿಡಲಾರ
ಮುಡಿಗಿಂತ ಮಿಗಿಲಾದ ಸ್ಥಳ ನೀಡಬಲ್ಲ

ನಲುಗದಿರು ಕೋಮಲೆ ಇಲ್ಲದನು ನೆನೆಸಿ
ಬಾಡಿ ಹೋಗುವ ಭಾವ ಮುದುಡಿ ಹೋಗಲಿ ಇಂದೇ
ಅರಳಲಿ ಬಾಡಿದ ಭಾವ ಮುಕ್ತಿ ಪಥದೆಡೆಗೆ
ಮುಡಿಗಿಂತ ಮಿಗಿಲಾದ ನೆಲೆ ದೊರಕಿತಲ್ಲ

No comments:

Post a Comment