Thursday, April 15, 2010

world heritage day

On Occasion of the world heritage day , I wish to introduce a piece of history & heritage of Bangalore.

Gavipura is one of the Bangalore's urban village, one among a few sites that the modern city has evolved from.
The cave temple dedicated to Lord Gangadhareshwara, The plase also known as gowtham kshetra & bharadwaja kshetra, wherein the sage Gowtham and bharadwaja used to worship Lord gangadhara here.

The Kempabudhi lake built by Kempegowda - I arounds 1540's, which is named after his daughter in law...

The watch tower built by Kempegowda -II. who was a visionary, who had a fore thought to restrict the exorbitant growth of the city without proper development of basic amenities.... to ensure he has built four border watch towers to Bangalore.... The western watch tower of Bangalore is located by side of Kempambudhi lake.

The Gavipura has one of the ancient temple of Big bull at basavanagudi, and dodda ganapathi temple, sunkenahalli village, hari hara gudda temple, dhobhji ghat, wrestling schools, swimming pools maratha colony, social institutions Ramakrishna Ashram, Udayabhanu kalasangha, Rashtrotthana parishath, Kalamandir, SVYAAS, and so on makes a one of our unique urban centres.

To know more about this unique mixture of past and present of bangalore..... pls do visit Udayabhanu kalasangha for a dialogue based project on world heritage day on April 18 2010 at 10 AM behind Ramakrishna Ashram, Bassavanagudi.

Friday, April 2, 2010

ಬೆಂಗಳೂರೆಂಬೋ ಮಾಯಾನಗರಿ - I

ಬೆಂಗಳೂರು ಅಂದರೆ ಇಂದು ನಿನ್ನೆಯದಲ್ಲ. ನೀವು ಲಾಲಬಾಗ್ ತೋಟದಲ್ಲಿ ಕೆಂಪೇಗೌಡ ಗಡಿ ಗೋಪುರದ ಬಳಿ ನಿಂತಾಗ ಸುಮಾರು ೨೯೦-೩೦೦ ಕೋಟಿ ವರುಷಗಳ ಬಂಡೆಯ ಮೇಲೆ ನಿಂತಿದ್ದೀರಿ.
ಕ್ರಿಸ್ತ ಪೂರ್ವ ೬೦೦೦ ದಷ್ಟು ಹಿಂದೆಯೇ ಇಲ್ಲಿ ಹೊಸ ಶಿಲಾಯುಗದ ಜನರು ವಾಸ ಮಾಡುತ್ತಿದ್ದರು. ೧೬-17ನೆಯ ಶತಮಾದಲ್ಲಿ ನಿರ್ಮಾಣವಾದ ಹಲಸೂರಿನ ಸೋಮೇಶ್ವರ ದೇವಾಲಯ ನಗರದ ಹಿರಿಮೆಗಳಲ್ಲೊಂದು.

ಬೆಂಗಳೂರು ಹಾಗೂ ಇಂದಿನ ಕರ್ನಾಟಕದ ಬಹುಭಾಗ ದಕ್ಷಿಣ ಭಾರತದ ಪ್ರಸ್ಥಭೂಮಿ. ಸಮುದ್ರ ಮಟ್ಟದಿಂದ ಸರಾಸರಿ ೯೦೦ ಮೀಟರು ಎತ್ತರದಲ್ಲಿರುವುದರಿಂದ ಇಲ್ಲಿನ ಪರಿಸರ ಸದಾ ಆಹ್ಲಾದಕರ. ಬೆಂಗಳೂರು (ಮೆಟ್ರೋಪೋಲ್ ) ಮಹಾನಗರ ಸುಮಾರು ೧೪೦೦ ಚ.ಕಿ.ಮೀ ಪ್ರದೇಶಗಳನ್ನು ಒಳಗೊಂಡ ಪ್ರದೇಶ.
1949ರಲ್ಲಿ ಬೆಂಗಳೂರಿಗೆ ನಗರಸಭೆ ಆಡಳಿತ ಆರಂಭ. ಆಗ ನರದ ವಿಸ್ತೀರ್ಣ ೬೯ ಚ.ಕಿಲೋ ಮೀಟರು. 1970ರ ದಶಕದಲ್ಲಿ ೪೦೦ ಚದರ ಕಲೋಮೀಟರಿಗೆ ಹಿಗ್ಗಿತು. ಈಗ ಬೆಳೆಯುತ್ತಿರುವ ವೇಗ ಮತ್ತು ಅದರ ಓಘ ದೇವರಿಗೇ ಪ್ರೀತಿ.
ಬಸವನಗುಡಿಯ ಬಸವನ ಪಾದದ ಕೆಳಗೆ ಉದ್ಭವವಾಗುವ ವೃಷಭಾವತಿ ಬಿಟ್ಟರೆ ಹೆಸರಿಗೆ ಕೂಡಾ ಬೆಂಗಳೂರಿಗೆ ಬೇರೆ ನದಿ ಇಲ್ಲ. ಬಸವನ ಪಾದದ ಅಡಿಯಿಂದ ಶುದ್ಧ ನೀರಿನ ತೊರೆಯಾಗಿ ಹರಿಯುವ ವೃಷಭಾವತಿ ನದಿಯ ಬಗ್ಗೆ ಶಾಸನಗಳಲ್ಲಿ ಕೂಡಾ ಉಲ್ಲೇಖವಿದೆ.

Thursday, April 1, 2010

April Fool

ಏಪ್ರಿಲ್ ಫೂಲ್
ಯಾಕೆ ಜೂನ್ ಅಥವಾ ನವೆಂಬರ್ ಫೂಲ್ ಅಲ್ಲ.
ಹಿಂದೆ ವರುಷದ ಆರಂಭ ಏಪ್ರಿಲ್ ಒಂದರಿಂದ ಆರಂಭ ಆಗುತ್ತಾ ಇತ್ತು.
ಆ ನಂತರ ಈ ದಿನಾಂಕವನ್ನು ಕ್ರಿಸ್ತ ಜನನದ ನಂತರದ ತಿಂಗಳಿಂದ ಆರಂಭಿಸಲು ತೀರ್ಮಾನಿಸಲಾಯಿತು. ಆದರೆ ಹೆಚ್ಚಿನ ಜನ ಬದಲಾವಣೆಗೆ ಸ್ಪಂದಿಸಲಿಲ್ಲ. ಅವರನ್ನು ಒಪ್ಪಸುವ ಸಲುವಾಗಿ ಈ ರೀತಿಯ ಪ್ರಚಾರ ಆರಂಭ ಆಯಿತಂತೆ.

ಮಾರ್ಖರಾಗಬಯಸದ ಜನ ಜನವರಿಯನ್ನೇ ತಮ್ಮ ವರುಷದ ಆರಂಭ ಎಂದು ಬದಲಾಯಿಸಿಕೊಳ್ಳಲಾರಂಭ ಮಾಡಿದರು. ಹೀಗೆ ಪೂರ್ಣ ಬದಲಾಗದ ಜನರನ್ನು ಮೂರ್ಖರು ಎಂದು ಆರಂಭ ಮಾಡಿದ ಗೇಲಿ ಇಂದು ಎಲ್ಲಿಗೆ ಬಂದು ನಿಂತಿದೆ.

ಹೇಳಿ ಇಂದು ನಿಮ್ಮನ್ನು ಮೂರ್ಖರನ್ನಾಗಿಸಿದವರಿಗೆ ಈ ಕಾರಣ ಗೊತ್ತಾ ಅಂತಾ ?????

Wednesday, March 31, 2010

ಸಂತ ಶ್ರೀ ಶ್ರೀಧರ ಸ್ವಾಮಿ- ವರದಪುರ ಪುಣ್ಯ ಸಂಸ್ಮರಣೆ

ಸಂತ ಶ್ರೀಧರ ಸ್ವಾಮಿ , ಕನ್ನಡ ನಾಡಿನ ಮಲೆನಾಡ ಸೀಮೆಯಲ್ಲಿ ನೆಲೆ ನಿಂತು ಅಧ್ಬುತ ಪವಾಡಗಳನ್ನು ತೋರಿದ, ತೋರುತ್ತಿರುವ ಮಹಾತ್ಮ.

19.12.1907ರಲ್ಲಿ ಜನಿಸಿದ ಸ್ವಾಮಿಗಳು ದತ್ತಾತ್ರೇಯರ ಅವತಾರವೆಂದು ಪರಿಗಣಿಸಲ್ಪಟ್ಟ ಮಹನೀಯರು. ರಾಷ್ಟ್ರ ಸಂತ, ಶಿವಾಜಿ ಮಹಾರಾಜರ ಗುರು ಶ್ರೀ ಸಮಥ೵ ರಾಮದಾಸರ ಶಿಷ್ಯರಾಗಿ, ದಿಕ್ಷಾ ಬದ್ಧರಾಗಿ, ನಾಡಿನ ಉದ್ದಗಲಕ್ಕೂ ಸಂಚರಿಸಿದವರು. ಪರಿವ್ರಾಜಕರಾಗಿ, ಕಾಶಿಯಲ್ಲಿ ತಪಸ್ಸಾನ್ನಾಚರಿಸಿ ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಾದ್ಯಂತ ಸಂಚರಿಸಿ ಕನಾ೵ಟಕದಲ್ಲಿ ಬಂದಾಗ ತಾಯಿ ದುಗಾ೵ಂಬೆಯ ಻ಣತಿಯ ಮೇರೆಗೆ ಸಾಗರ ಜಿಲ್ಲೆಯ ವರದಹಳ್ಳಿಯಲ್ಲಿ ನೆಲೆ ನಿಂತು, ದುಗಾ೵ ದೇವಾಲಯದ ಜೀಣೋ೵ದ್ದಾರ ಮಾಡಿ ಪಊಜಾದಿ ಕಾರ್ಯಗಳು ನಿರಂತರವಾಗಿ ನಡೆಯಲು ಕಾರಣರಾದವರು.

ವರದಹಳ್ಳಿಯಲ್ಲಿ ಗುಡ್ಡದ ಮೇಲೆ ನಿಂತು, ಕೇವಲ ತಮ್ಮ ತಪಶ್ಶಕ್ತಿಯಿಂದ ನೀರನ್ನು ಉದ್ಭಿವಿಸಿ, ಉದ್ಭವಗಂಗೆಯ ನೆಲೆಗೆ ಕಾರಣೀಕೃತರು. ಈ ನೀರು. ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿದ್ದು, ರೋಗ ನಿವಾರಣ ಶಕ್ತಿಯಾಗಿಯೂ ಭಕ್ತರಲ್ಲಿ ಚಿರಪರಿಚಿತ.
ತಮ್ಮ ಅವತಾರ ಕಾಲದಲ್ಲಿ ನಿರಂತರ ಪವಾಡ ಮತ್ತು ಕೃಪಾದೃಷ್ಟಿಯಿಂದ ಭಕ್ತರ ಕಷ್ಟಗಳನ್ನು ದೂರ ಮಾಡಿ ಅವರ ಬದುಕಿನಲ್ಲಿ ಸಂತೃಪ್ತಿ ತಂದರು.

ಇಂದು ಚೈತ್ರ ಬಹುಳ ಬಿದಿಗೆ. ಶ್ರೀ ಶ್ರೀಧರ ಸ್ವಾಮಿಗಳು ಮುಕ್ತರಾದ ದಿನ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ. 19.04.1973. ಻ವರ ಸಂಸ್ಮರಣೆಗೆ ಈ ಲೇಖನ.

Monday, March 29, 2010

ಬೆಂಗಳೂರು ಕರಗ

ಇಂದು ಚೈತ್ರ ಮಾಸದ ಹುಣ್ಣಿಮೆ..... ವರುಷದ ಮೊದಲ ಬೆಳದಿಂಗಳ ರಾತ್ರಿ. ಯುಗಾದಿಯ ನಂತರದ ವಸಂತ ನವರಾತ್ರಿ ಈ ಕರಗದೊಂದಿಗೆ ಮುಕ್ತಾಯವಾಗುತ್ತದೆ.
ಬೆಂಗಳೂರು ಕರಗ ಬೆಂಗಳೂರಿನ ಹಿರಿಮೆಯ ಸಂಕೇತ.
ಕೆಂಪೇಗೌಡರು ಕಟ್ಟಿದ 64 ಪೇಟೆಗಳ ನಡುವೆ ಸಂಚರಿಸುವ ಕರಗ ಧಾಮಿ೵ಕ ಒಡನಾಟದ ಸಂಕೇತವೂ ಹೌದು. ಹಾಜಿ ಮಸ್ತಾನ್ ಸಾಬ್ ದಗಾ೵ದಲ್ಲಿ ಪೂಜೆಗೊಳ್ಳುವ ಮೂಲಕ ಧಾಮಿ೵ಕ ಚೌಕಟ್ಟನ್ನೂ ಸಹಾ ಮೀರುತ್ತದೆ.
ಕರಗವು ದ್ರೌಪದಿ ಕರಗ ಎಂದೇ ಪ್ರಸಿದ್ದಿ. ಮಾತೃ ಪೂಜೆಯ ಸಂಪ್ರದಾಯದ ಹಿನ್ನೆಲೆ ಇದಕ್ಕಿದೆ.
ಕುಂಭದಲ್ಲಿ ದುಗೆ೵ಯನ್ನು ಆವಾಹಿಸಿ. ಅದನ್ನು ಪೂಜಿಸಿ, ಮಲ್ಲಿಗೆ ಮಾಲೆಗಳಿಂದ ಅಲಂಕರಿಸಿ, ಖಡ್ಗಧಾರಿಗಳಾದ ವೀರಕುಮಾರರ ರಕ್ಷಣೆಯಲ್ಲಿ ಚೈತ್ರ ಹುಣ್ಣಿಮೆಯ ರಾತ್ರಿ ಧಮ೵ರಾಯ ದೇವಸ್ಥಾನದಿಂದ ಹೊರಡುವ ಕರಗ, ಇಡಿಯ ಪೇಟೆ ಪ್ರದೇಶವನ್ನು ಸಂಚರಿಸಿ ಬೆಳಗ್ಗೆ ದೇವಸ್ಥಾನಕ್ಕೆ ಹಿಂತಿರುಗುತ್ತದೆ.

ಇದು ಒಂದು ರೀತಿಯಲ್ಲಿ ಪ್ರಕೃತಿ ಪೂಜೆಯೂ ಹೌದು. ಸಂಪಂಗಿ ಕೆರೆ ಹಾಗೂ ಕೆಂಪಾಂಬುಧಿ ಕೆರೆಗಳ ಸಮೀಪ ಪೂಜೆಗೊಳ್ಳುವ ಹಸಿ ಕರಗ ಜನರಿಗೆ ಜಲಮೂಲಗಳ ಬಗ್ಗೆ ಗೌರವ ಮೂಡಿಸುವ ಪ್ರಕ್ರಿಯೆಯೂ ಹೌದು.
ಎಲ್ಲ ಜಾತಿ ಮತಗಳ ಜನರೂ ಸಹಾ ಇದರಲ್ಲಿ ಪಾಲುಗೊಳ್ಳುತ್ತಾರೆ. ಬೆಂಗಳೂರಿನ ಸಮೀಪದ ಹಳ್ಳಿಗಳಿಂದ ನೂರಾರು ದೇವಾಲಯಗಳ ರಥಗಳು ಈ ಜಾತ್ರೆಯಲ್ಲಿ ಪಾಲ್ಗೊಂಡು ಇದೊಂದು ಉತ್ಸವವಾಗಿ ಮಾಪಾ೵ಡಾಗುತ್ತದೆ.