Wednesday, March 31, 2010

ಸಂತ ಶ್ರೀ ಶ್ರೀಧರ ಸ್ವಾಮಿ- ವರದಪುರ ಪುಣ್ಯ ಸಂಸ್ಮರಣೆ

ಸಂತ ಶ್ರೀಧರ ಸ್ವಾಮಿ , ಕನ್ನಡ ನಾಡಿನ ಮಲೆನಾಡ ಸೀಮೆಯಲ್ಲಿ ನೆಲೆ ನಿಂತು ಅಧ್ಬುತ ಪವಾಡಗಳನ್ನು ತೋರಿದ, ತೋರುತ್ತಿರುವ ಮಹಾತ್ಮ.

19.12.1907ರಲ್ಲಿ ಜನಿಸಿದ ಸ್ವಾಮಿಗಳು ದತ್ತಾತ್ರೇಯರ ಅವತಾರವೆಂದು ಪರಿಗಣಿಸಲ್ಪಟ್ಟ ಮಹನೀಯರು. ರಾಷ್ಟ್ರ ಸಂತ, ಶಿವಾಜಿ ಮಹಾರಾಜರ ಗುರು ಶ್ರೀ ಸಮಥ೵ ರಾಮದಾಸರ ಶಿಷ್ಯರಾಗಿ, ದಿಕ್ಷಾ ಬದ್ಧರಾಗಿ, ನಾಡಿನ ಉದ್ದಗಲಕ್ಕೂ ಸಂಚರಿಸಿದವರು. ಪರಿವ್ರಾಜಕರಾಗಿ, ಕಾಶಿಯಲ್ಲಿ ತಪಸ್ಸಾನ್ನಾಚರಿಸಿ ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಾದ್ಯಂತ ಸಂಚರಿಸಿ ಕನಾ೵ಟಕದಲ್ಲಿ ಬಂದಾಗ ತಾಯಿ ದುಗಾ೵ಂಬೆಯ ಻ಣತಿಯ ಮೇರೆಗೆ ಸಾಗರ ಜಿಲ್ಲೆಯ ವರದಹಳ್ಳಿಯಲ್ಲಿ ನೆಲೆ ನಿಂತು, ದುಗಾ೵ ದೇವಾಲಯದ ಜೀಣೋ೵ದ್ದಾರ ಮಾಡಿ ಪಊಜಾದಿ ಕಾರ್ಯಗಳು ನಿರಂತರವಾಗಿ ನಡೆಯಲು ಕಾರಣರಾದವರು.

ವರದಹಳ್ಳಿಯಲ್ಲಿ ಗುಡ್ಡದ ಮೇಲೆ ನಿಂತು, ಕೇವಲ ತಮ್ಮ ತಪಶ್ಶಕ್ತಿಯಿಂದ ನೀರನ್ನು ಉದ್ಭಿವಿಸಿ, ಉದ್ಭವಗಂಗೆಯ ನೆಲೆಗೆ ಕಾರಣೀಕೃತರು. ಈ ನೀರು. ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿದ್ದು, ರೋಗ ನಿವಾರಣ ಶಕ್ತಿಯಾಗಿಯೂ ಭಕ್ತರಲ್ಲಿ ಚಿರಪರಿಚಿತ.
ತಮ್ಮ ಅವತಾರ ಕಾಲದಲ್ಲಿ ನಿರಂತರ ಪವಾಡ ಮತ್ತು ಕೃಪಾದೃಷ್ಟಿಯಿಂದ ಭಕ್ತರ ಕಷ್ಟಗಳನ್ನು ದೂರ ಮಾಡಿ ಅವರ ಬದುಕಿನಲ್ಲಿ ಸಂತೃಪ್ತಿ ತಂದರು.

ಇಂದು ಚೈತ್ರ ಬಹುಳ ಬಿದಿಗೆ. ಶ್ರೀ ಶ್ರೀಧರ ಸ್ವಾಮಿಗಳು ಮುಕ್ತರಾದ ದಿನ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ. 19.04.1973. ಻ವರ ಸಂಸ್ಮರಣೆಗೆ ಈ ಲೇಖನ.

Monday, March 29, 2010

ಬೆಂಗಳೂರು ಕರಗ

ಇಂದು ಚೈತ್ರ ಮಾಸದ ಹುಣ್ಣಿಮೆ..... ವರುಷದ ಮೊದಲ ಬೆಳದಿಂಗಳ ರಾತ್ರಿ. ಯುಗಾದಿಯ ನಂತರದ ವಸಂತ ನವರಾತ್ರಿ ಈ ಕರಗದೊಂದಿಗೆ ಮುಕ್ತಾಯವಾಗುತ್ತದೆ.
ಬೆಂಗಳೂರು ಕರಗ ಬೆಂಗಳೂರಿನ ಹಿರಿಮೆಯ ಸಂಕೇತ.
ಕೆಂಪೇಗೌಡರು ಕಟ್ಟಿದ 64 ಪೇಟೆಗಳ ನಡುವೆ ಸಂಚರಿಸುವ ಕರಗ ಧಾಮಿ೵ಕ ಒಡನಾಟದ ಸಂಕೇತವೂ ಹೌದು. ಹಾಜಿ ಮಸ್ತಾನ್ ಸಾಬ್ ದಗಾ೵ದಲ್ಲಿ ಪೂಜೆಗೊಳ್ಳುವ ಮೂಲಕ ಧಾಮಿ೵ಕ ಚೌಕಟ್ಟನ್ನೂ ಸಹಾ ಮೀರುತ್ತದೆ.
ಕರಗವು ದ್ರೌಪದಿ ಕರಗ ಎಂದೇ ಪ್ರಸಿದ್ದಿ. ಮಾತೃ ಪೂಜೆಯ ಸಂಪ್ರದಾಯದ ಹಿನ್ನೆಲೆ ಇದಕ್ಕಿದೆ.
ಕುಂಭದಲ್ಲಿ ದುಗೆ೵ಯನ್ನು ಆವಾಹಿಸಿ. ಅದನ್ನು ಪೂಜಿಸಿ, ಮಲ್ಲಿಗೆ ಮಾಲೆಗಳಿಂದ ಅಲಂಕರಿಸಿ, ಖಡ್ಗಧಾರಿಗಳಾದ ವೀರಕುಮಾರರ ರಕ್ಷಣೆಯಲ್ಲಿ ಚೈತ್ರ ಹುಣ್ಣಿಮೆಯ ರಾತ್ರಿ ಧಮ೵ರಾಯ ದೇವಸ್ಥಾನದಿಂದ ಹೊರಡುವ ಕರಗ, ಇಡಿಯ ಪೇಟೆ ಪ್ರದೇಶವನ್ನು ಸಂಚರಿಸಿ ಬೆಳಗ್ಗೆ ದೇವಸ್ಥಾನಕ್ಕೆ ಹಿಂತಿರುಗುತ್ತದೆ.

ಇದು ಒಂದು ರೀತಿಯಲ್ಲಿ ಪ್ರಕೃತಿ ಪೂಜೆಯೂ ಹೌದು. ಸಂಪಂಗಿ ಕೆರೆ ಹಾಗೂ ಕೆಂಪಾಂಬುಧಿ ಕೆರೆಗಳ ಸಮೀಪ ಪೂಜೆಗೊಳ್ಳುವ ಹಸಿ ಕರಗ ಜನರಿಗೆ ಜಲಮೂಲಗಳ ಬಗ್ಗೆ ಗೌರವ ಮೂಡಿಸುವ ಪ್ರಕ್ರಿಯೆಯೂ ಹೌದು.
ಎಲ್ಲ ಜಾತಿ ಮತಗಳ ಜನರೂ ಸಹಾ ಇದರಲ್ಲಿ ಪಾಲುಗೊಳ್ಳುತ್ತಾರೆ. ಬೆಂಗಳೂರಿನ ಸಮೀಪದ ಹಳ್ಳಿಗಳಿಂದ ನೂರಾರು ದೇವಾಲಯಗಳ ರಥಗಳು ಈ ಜಾತ್ರೆಯಲ್ಲಿ ಪಾಲ್ಗೊಂಡು ಇದೊಂದು ಉತ್ಸವವಾಗಿ ಮಾಪಾ೵ಡಾಗುತ್ತದೆ.