Wednesday, March 31, 2010

ಸಂತ ಶ್ರೀ ಶ್ರೀಧರ ಸ್ವಾಮಿ- ವರದಪುರ ಪುಣ್ಯ ಸಂಸ್ಮರಣೆ

ಸಂತ ಶ್ರೀಧರ ಸ್ವಾಮಿ , ಕನ್ನಡ ನಾಡಿನ ಮಲೆನಾಡ ಸೀಮೆಯಲ್ಲಿ ನೆಲೆ ನಿಂತು ಅಧ್ಬುತ ಪವಾಡಗಳನ್ನು ತೋರಿದ, ತೋರುತ್ತಿರುವ ಮಹಾತ್ಮ.

19.12.1907ರಲ್ಲಿ ಜನಿಸಿದ ಸ್ವಾಮಿಗಳು ದತ್ತಾತ್ರೇಯರ ಅವತಾರವೆಂದು ಪರಿಗಣಿಸಲ್ಪಟ್ಟ ಮಹನೀಯರು. ರಾಷ್ಟ್ರ ಸಂತ, ಶಿವಾಜಿ ಮಹಾರಾಜರ ಗುರು ಶ್ರೀ ಸಮಥ೵ ರಾಮದಾಸರ ಶಿಷ್ಯರಾಗಿ, ದಿಕ್ಷಾ ಬದ್ಧರಾಗಿ, ನಾಡಿನ ಉದ್ದಗಲಕ್ಕೂ ಸಂಚರಿಸಿದವರು. ಪರಿವ್ರಾಜಕರಾಗಿ, ಕಾಶಿಯಲ್ಲಿ ತಪಸ್ಸಾನ್ನಾಚರಿಸಿ ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಾದ್ಯಂತ ಸಂಚರಿಸಿ ಕನಾ೵ಟಕದಲ್ಲಿ ಬಂದಾಗ ತಾಯಿ ದುಗಾ೵ಂಬೆಯ ಻ಣತಿಯ ಮೇರೆಗೆ ಸಾಗರ ಜಿಲ್ಲೆಯ ವರದಹಳ್ಳಿಯಲ್ಲಿ ನೆಲೆ ನಿಂತು, ದುಗಾ೵ ದೇವಾಲಯದ ಜೀಣೋ೵ದ್ದಾರ ಮಾಡಿ ಪಊಜಾದಿ ಕಾರ್ಯಗಳು ನಿರಂತರವಾಗಿ ನಡೆಯಲು ಕಾರಣರಾದವರು.

ವರದಹಳ್ಳಿಯಲ್ಲಿ ಗುಡ್ಡದ ಮೇಲೆ ನಿಂತು, ಕೇವಲ ತಮ್ಮ ತಪಶ್ಶಕ್ತಿಯಿಂದ ನೀರನ್ನು ಉದ್ಭಿವಿಸಿ, ಉದ್ಭವಗಂಗೆಯ ನೆಲೆಗೆ ಕಾರಣೀಕೃತರು. ಈ ನೀರು. ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿದ್ದು, ರೋಗ ನಿವಾರಣ ಶಕ್ತಿಯಾಗಿಯೂ ಭಕ್ತರಲ್ಲಿ ಚಿರಪರಿಚಿತ.
ತಮ್ಮ ಅವತಾರ ಕಾಲದಲ್ಲಿ ನಿರಂತರ ಪವಾಡ ಮತ್ತು ಕೃಪಾದೃಷ್ಟಿಯಿಂದ ಭಕ್ತರ ಕಷ್ಟಗಳನ್ನು ದೂರ ಮಾಡಿ ಅವರ ಬದುಕಿನಲ್ಲಿ ಸಂತೃಪ್ತಿ ತಂದರು.

ಇಂದು ಚೈತ್ರ ಬಹುಳ ಬಿದಿಗೆ. ಶ್ರೀ ಶ್ರೀಧರ ಸ್ವಾಮಿಗಳು ಮುಕ್ತರಾದ ದಿನ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ. 19.04.1973. ಻ವರ ಸಂಸ್ಮರಣೆಗೆ ಈ ಲೇಖನ.

1 comment: